Sandhyavani | ಸಂಧ್ಯಾವಾಣಿ
By Udayavani
Sandhyavani | ಸಂಧ್ಯಾವಾಣಿApr 21, 2022
S1EP - 439 : ಅಪ್ಪ ನೆಟ್ಟ ಆಲದಮರ | story on blind belief
ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ, ಗುರುಗಳು ಪಾಠ ಶುರುಮಾಡುವ ಮುನ್ನ ಒಂದು ಬೆಕ್ಕನ್ನು ಹಿಡಿದು ಚೀಲದಲ್ಲಿ ಹಾಕಿ ಬಾಯಿಕಟ್ಟಿ ಗುರುಗಳ ಕಣ್ಣಳತೆಯಷ್ಟು ದೂರದಲ್ಲಿಡಬೇಕು ಪಾಠ ಮುಗಿದ ಮೇಲೆ ಅದನ್ನು ಬಿಡಬೇಕು. ಬಹಳದಿನಗಳಕಾಲ ಇದು ನಡೆಯಿತು. ಒಂದು ದಿನ ಗುರುಕುಲಾಧಿಪತಿಗಳು ಅಲ್ಲಿ ಬಂದ್ರು , ಅವರ ಕಣ್ಣಿಗೆ ಈ ಪದ್ಧತಿ ಬಿತ್ತು ಆಮೇಲೇನಾಯ್ತು.... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 59 :ಕೃಷ್ಣ ಸಂಧಾನ | Krishna Sandhana
S3 : EP - 59 :ಕೃಷ್ಣ ಸಂಧಾನ | Krishna Sandhana
ಹಿಂದೆ ನಿರ್ಧರಿಸಿದಂತೆ ಕೃಷ್ಣ ಹಸ್ತಿನಾಪುರಕ್ಕೆ ಬರುವ ಸನ್ನಿವೇಶ.. ಕೃಷ್ಣ ಸಂಧಾನಕ್ಕೆ ಹೊರಡುತ್ತೇನೆ ಅಂದಾಗ ದ್ರೌಪದಿಗೆ ದುಃಖ ಉಕ್ಕಿ ಉಕ್ಕಿ ಬಂತಂತೆ.. ಕಣ್ಣೀರು ಸುರಿಯುತ್ತಿದ್ದರೂ ಸಂಯಮದಿಂದ ಹೇಳ್ತಾಳೆ.. ' ಕೇಶವಾ ನಾನು ನಿನ್ನ ಪ್ರೀತಿಗೆ ಪಾತ್ರಳಾದ ಸಖಿ, ನಿನ್ನಲ್ಲಿರುವ ಸಲುಗೆಯಿಂದ ಹೇಳುತ್ತಿದ್ದೇನೆ.. ಪ್ರಸಿದ್ಧ ಪಾಂಚಾಲ ವಂಶದ ದ್ರುಪದ ಮಹಾರಾಜನ ಮಗಳಾದರೂ ಯಜ್ಞಕುಂಡದಿಂದ ಅಯೋನಿಜೆಯಾಗಿ ಜನಿಸಿದೆ ಆದರೆ ..ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 438 : ಸಾಯುವ ಮುನ್ನ ಕಾಣುವ ಪ್ರಪಂಚ | life before the death
ಒಬ್ಬನಿಗೆ ಬದುಕು ಸಾಕಾಯ್ತು ಎಲ್ಲಿ ನೋಡಿದರಲ್ಲಿ ಇಲಿಗಳ ಓಟ ಮೇಲಾಟ.. ಯಾವುದಾದರೂ ಒಂದು ದೂರದ ಪರ್ವತದ ಗುಹೆಯಲ್ಲಿ ಅಡಗಿ ಕುಳಿತು ಇವೆಲ್ಲ ತಲೆಬಿಸಿಯಿಂದ ಪಾರಾಗುವ ಅಂತ ಅನ್ಸಿದ್ರೂ ಕೂಡ.. ಸೌಕರ್ಯಗಳಿಗೆ, ಸುಖಕ್ಕೆ ಒಗ್ಗಿ ಹೋದ ದೇಹ ಕಷ್ಟಗಳಿಗೆ ಹೆದರ್ತಾ ಇತ್ತು. ಆಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 437 :ಕಗ್ಗತ್ತಿಲಿನಲ್ಲಿ ನೀರಿಗಿಳಿದು ಮಾಯವಾದ ಗುರುನಾನಕ| Story of Gurunanakರು
ಒಂದು ಕಗ್ಗತ್ತಲಲ್ಲಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದಾನನೊಂದಿಗೆ ನದಿ ತೀರದಲ್ಲಿ ಕುಳಿತುಕೊಂಡಿದ್ದರಂತೆ ಅವರ ಅವರ ಕಣ್ಣೆರಡು ತೆರೆದುಕೊಂಡೇ ಇದ್ರೂ ಚಲನೆ ಇರಲಿಲ್ಲ ತದೇಕಚಿತ್ತರಾಗಿ ತುಂಬಿ ಹರಿಯುತ್ತಿದ್ದ ನದಿಯನ್ನೇ ದಿಟ್ಟಿಸುತ್ತಿದ್ದರು, ಇದ್ದಕ್ಕಿದಂತೆಯೇ ಮೈಮೇಲಿನ ಬಟ್ಟೆಯೆಲ್ಲಾ ಸರಸರನೆ ಕಳಚಿದರು ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 58 : ಧೃತರಾಷ್ಟ್ರ ನಿಗೆ ಎದುರಾದ ಗೊಂದಲ | Confusion of Dhritarashtra
ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು . ವಿದುರನ ಮಾತುಗಳನ್ನು ಕೇಳಿದ ಧೃತರಾಷ್ಟ್ರ ಮತ್ತಷ್ಟು ಚಿಂತಿತನಾದ. ತನ್ನ ಮಗ ದುಷ್ಟ ಎಂದು ಗೊತ್ತಿದ್ದರೂ ಆತ ಪುತ್ರ ವ್ಯಾಮೋಹಕ್ಕೆ ಒಳಗಾಗಿದ್ದ. ಈಗ ನಿರ್ಣಾಯಕ ಘಟ್ಟ ಎದುರಾಯಿತು. ಏನದು ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 436 :ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires practicality
ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 435 :ಸಂಸ್ಕಾರ ಎಂದರೇನು ?| Meaning of Samskara
ಹುಟ್ಟಿನಿಂದ ಬ್ರಾಹ್ಮಣನಾಗಿದ್ದವನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ದೂರ ದೇಶದಿಂದ ಬರುವ ವ್ಯಾಪಾರಿಗಳನ್ನು ಮೋಸದಿಂದ ದೋಚುವುದನ್ನು ಕಸುಬಾಗಿ ಮಾಡಿಕೊಂಡಿದ್ದ. ತುಂಬಾ ಕಾಲ ಇದು ನಡೆಯಿತು. ಹೀಗಿರುವಾಗ ಒಮ್ಮೆ ವಿದೇಶದಿಂದ ವ್ಯಾಪಾರಿಗಳ ತಂಡವೊಂದು ಬಂತು, ಬಹುಮೂಲ್ಯ ವಸ್ತುಗಳನ್ನು ಅವರ ದೇಶದಿಂದ ತಂದಿರೋದು ಬ್ರಾಹ್ಮಣನ ಗಮನಕ್ಕೆ ಬಂತು ಆಮೇಲೇನಾಯ್ತು ?
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 57 : ಮಹಾಭಾರತ ಯುದ್ಧ ತಪ್ಪಿಸಲು ಸಂಜಯನ ಪ್ರಯತ್ನ | Sanjayan's attempt to avoid the Mahabharata war
ಸಂಜಯ ದೃತರಾಷ್ಟ್ರನ ಆದೇಶದಂತೆ ಪಾಂಡವರು ತಾತ್ಕಾಲಿಕವಾಗಿ ವಾಸ್ತವ್ಯ ಮಾಡಿರುವ ಉಪಪ್ಲಾವ್ಯ ನಗರಕ್ಕೆ ಬಂದ, ಉಭಯಕುಶಲೋಪರಿಗಳಾಯಿತು. ನಂತರ ಅವನು ಪಾಂಡವರ ಕುರಿತು ಸತ್ವಗುಣ ಪ್ರಧಾನನಾದ ಯುಧಿಷ್ಠಿರ ನೀವು ಅಪಾರ ಸೈನ್ಯ ಬಲ ಹೊಂದಿದ್ದೀರಿ, ಹೀಗಿರುವಾಗ ಯುದ್ಧವೇನಾದರೂ ಅನಿವಾರ್ಯವಾದರೆ ಎರಡೂ ಕಡೆಗಳಲ್ಲಿ ಅಗಾಧವಾದ ನಷ್ಟ ಸಂಭವಿಸುವುದು ಖಂಡಿತಾ, ಹಾಗಾಗಿ..
ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 434 : ನರಿ ಹಾಗೂ ರಣಹದ್ದಿನ ಸ್ವಾರ್ಥ ಮುಖವಾಡ | Story of Selfishness
ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಯರಿಗೆ ಹೇಳಿದ ಕಥೆಯಿದು. ಒಂದಾನೊಂದು ಕಾಲದಲ್ಲಿ ಬ್ರಾಹ್ಮಣ ದಂಪತಿಗೆ ಬಹಳಾ ಕಾಲ ಸಂತತಿ ಇರಲಿಲ್ಲ.. ಕಡೆಗೂ ಒಂದು ಮಗು ಆಯಿತು ಹುಣ್ಣೆಮೆ ಚಂದಿರನಹಾಗಿದ್ದ ಆ ಮುಗುವನ್ನ ನೋಡಿ ಆ ದಂಪತಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.. ಆದರೆ .. ಪೂರ್ತಿ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 433:ಜಗತ್ತಿಗೆ ಮಾದರಿ ಪ್ರಾಚೀನ ಸಂಸ್ಕ್ರತಿ | Significance of ancient culture
ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು... ಪೂರ್ತಿ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 56 : ಛದ್ಮವೇಷಗಳಿಂದ ಹೊರಬಂದ ಪಾಂಡವರು, ಯುದ್ಧ ನಿರ್ಣಯ.|War resolution
ಹನ್ನೆರಡು ವರ್ಷ ವನವಾಸ ಹಾಗು ಒಂದು ವರ್ಷ ಅಜ್ಞಾತವಾಸಗಾಲ ಅವಧಿ ಮುಗಿದು ಪಾಂಡವರು ತಮ್ಮ ಛದ್ಮವೇಷಗಳಿಂದ ಹೊರಬಂದು ಮಂಗಳ ಸ್ನಾನ ಮಾಡಿ, ದಿವ್ಯ ವಸ್ತ್ರಾಭರಣಗಳನ್ನು ಧರಿಸಿ ವಿರಾಟನ ಆಸ್ಥಾನಕ್ಕೆ ಬಂದರು ಆಗ ....
ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 432 :ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | Story of Kalidasa
ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 55 : ಪಾಂಡವರ ಅಜ್ಞಾತವಾಸದ ಕೊನೆಯ ಹಂತ | Agnathavasam of Pandavas
ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು . ಪಾಂಡವರ ಅಜ್ಞಾತ ವಾಸ ಮುಗಿಯುವ ಹಂತದಲ್ಲಿತ್ತು. ಇತ್ತ ಕೌರವರು ಪಾಂಡವರನ್ನು ಹುಡುಕಲು ಯತ್ನಿಸುತ್ತಿದ್ದರು. ಹೀಗಿರುವಾಗ ವಿರಾಟ ರಾಜನ ವಿರುದ್ದ ಕೌರವರು ಯುದ್ಧ ಸಾರಿದರು. ಆಗ ಪಾಂಡವರು ಈ ಯುದ್ಧದಲ್ಲಿ ಪಾಲ್ಗೊಂಡರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 431 : ಜೀವನ ಪ್ರೀತಿ ಎಂದರೇನು ? How to lead happy life
ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 430 : ತಿಮ್ಮ ಗುರುವಿನ ಪಾಠ | Lesson's from Timmaguru
ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 54 : ಕೀಚಕ ವಧೆ | Story of Kichaka
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ತನ್ನ ಅಕ್ಕನಲ್ಲಿ ದ್ರೌಪದಿಯನ್ನು ಹೇಗಾದರೂ ಮಾಡಿ ತಾನು ಇದ್ದಲ್ಲಿಗೆ ಕಳಿಸಲು ಕೇಳಿಕೊಂಡ . ತಮ್ಮನ ಮೇಲಿನ ಪ್ರೀತಿಯಿಂದ ಕೀಚಕನ ಅಕ್ಕ ದ್ರೌಪದಿಯನ್ನು ಒತ್ತಾಯವಾಗಿ ಕೀಚಕನಿದ್ದಲ್ಲಿಗೆ ಕಳುಹಿಸಿದಳು. ಮುಂದೆನಾಯ್ತು , ದ್ರೌಪದಿಗೆ ಅಲ್ಲಾದ ಅವಮಾನವೇನು, ಕೀಚಕನ ವಧೆ ಹೇಗಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 429 :ಭಾರದ್ವಾಜ ಋಷಿಯ ಕತೆ. Story of Bharadhvaja Muni
ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ಕೇಳಿ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasa
S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasa
ಪಾಂಡವರ ಹನ್ನೆರಡು ವರ್ಷಗಳ ವನವಾಸ ಮುಗೀತಾ ಬರ್ತಿತ್ತು, ಅವರಿನ್ನು ಒಂದು ವರ್ಷ ಅಜ್ಞಾತ ವಾಸಕ್ಕೆ ಸಜ್ಜಾಗಬೇಕಿತ್ತು, ಹನ್ನೆರಡು ವರ್ಷಗಳಷ್ಟು ದೀರ್ಘವಾದ ಕಾಲ ತಮ್ಮೊಂದಿಗೆ ಬಾಂಧವರಂತಿದ್ದ ವಿದ್ವಾಂಸರಾದ ಬ್ರಾಹ್ಮಣರನ್ನೂ, ತಪಸ್ವಿಗಳನ್ನೂ ಋಷಿ ಮುನಿಗಳನ್ನೂ ಬೀಳ್ಕೊಡಬೇಕಾಗಿ ಬಂದಾಗ.. ಪಾಂಡವರು ದುಃಖದಿಂದ ಅವರಿಗೆ ನಮಿಸಿ ಆಶೀರ್ವಾದ ಪಡೆದು ಹೊರಟಾಗ.. ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 428 :ಪೆಟ್ಟುತಿಂದ ಮಕ್ಕಳು| Story of a family
ತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ|Surya Mandal
S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ..
ಬೆಳಕು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲಿಗಳಷ್ಟು ವೇಗದಲ್ಲಿ ಪಯಣಿಸುತ್ತದೆ. ಒಂದು ಸೆಕೆಂಡಿಗೆ ಈ ವೇಗದಲ್ಲಿ ಏಳುವರೆ ಬಾರಿ ಭೂಮಿಗೆ ಸುತ್ತು ಬರಬಹುದು ಇದೇ ವೇಗದಲ್ಲಿ ಬೆಳಕಿನ ಪಯಣ ಒಂದು ವರ್ಷ ಸಾಗುವುದನ್ನ ಒಂದು ಬೆಳಕಿನ ವರ್ಷ ಎಂದು ಪರಿಗಣಿಸಿ ಅಂತರ್ನಿಹಾರಿಕೆಗಳ ದೂರವನ್ನ ಅಳೆಯಲಾಗುತ್ತದೆ.
ಆಮೇಲೆ ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers
S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers ಪಾಂಡವರು ಕಾಮ್ಯಕ ವನದಿಂದ ದ್ವೈತ ವನಕ್ಕೆ ಮರಳಿ ಹೋದರು.. ಅಲ್ಲಿ ಮಿತಾಹಾರಿಗಳಾಗಿ ವೃತನಿಷ್ಠರಾಗಿ ಇರ್ತಾ ಇದ್ರು. ಹೀಗಿರುವಾಗ ಒಂದು ದಿನ ಒಬ್ಬ ಬ್ರಾಹ್ಮಣ ಅವರು ಇದ್ದಲ್ಲಿಗೆ ಬಂದ, ಮತ್ತೆ ಹೇಳಿದ .. ಅಯ್ಯಾ ಜಿಂಕೆಯೊಂದು ನನ್ನ ಆಶ್ರಮಕ್ಕೆ ಬಂತು ನಾನು ಅಗ್ನಿ ಮತಿಸುವ ದಂಡ ಮತ್ತು ಅರಣೆಯನ್ನು ತೂಗುಹಾಕಿದ ಮರದ ಕಾಂಡಕ್ಕೆ ಮೈ ಉಜ್ಜುತ್ತಾ ಇತ್ತು ಆವಾಗ ಅದರ ಕೊಂಬಿಗೆ ಅರಣೆ ದಂಡಗಳು ಸಿಲುಕಿಕೊಂಡವು ಆಮೇಲೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 426 : ಎಲ್ಲವೂ ದೇವರ ಇಚ್ಛೆ? | Is everything God's will?
S1EP - 426 :ಎಲ್ಲವೂ ದೇವರ ಇಚ್ಛೆ? | Is everything God's will?
ಆಳ ಸಮುದ್ರದ ನಡುವೆ ಹಡಗೊಂಡು ಬಿರುಗಾಳಿಗೆ ಸಿಲುಕಿತು. ಆ ಹಡಗಿನಲ್ಲಿ ಇದ್ದವರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ ಅಲ್ಲಿದ್ದ ಜನರು ರಕ್ಷಣೆಗಾಗಿ ದೇವರ ಮೊರೆ ಹೋದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 425 : ಸಾಮ್ರಾಟ್ ಮಿಲಿಂದನ ಕಥೆ |Story of Samrat Milind
ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ ..... ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 424 : ರಾಮಾಯಣದ ಕಥೆ | Story of Ramayana
ರಾಮಾಯಣದ ಯುದ್ಧಖಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 423 : ಭಕ್ತಿಯ ಪರಿಭಾಷೆ ಏನು ? | What is the definition of devotion?
ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara
In this episode, Dr. Sandhya S. Pai narrates very famous Mahabharata S3 : EP - 51 : ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara
ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ ಪಾಂಡವರು ವನವಾಸವನ್ನು ಮುಗಿಸಿ ಅಜ್ಞಾತವಾಸಕ್ಕಾಗಿ ವಿರಾಟನ ಆಸ್ಥಾನ ದಲ್ಲಿದ್ದರು. ಈ ಸಮಯದಲ್ಲಿಯೇ ದುರ್ಯೋಧನ ಪಾಂಡವರನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಈ ನಡುವೆ ಅತ್ತ ಕೌರವರು ಹಾಗೂ ಸುಶರ್ಮ ಸೇರಿ ವಿರಾಟ ರಾಜನ ವಿರುದ್ಧ ಯುದ್ಧಕ್ಕೆ ಹೋದರು. ಆ ಸಮಯದಲ್ಲಿ ಏನಾಯ್ತು ಉತ್ತರಕುಮಾರ ಮತ್ತು ಬೃಹನ್ನಳೆ ಹೇಗೆ ಯುದ್ಧ ದಲ್ಲಿ ಪಾಲ್ಗೊಂಡರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 422 : ಸಣ್ಣ ವಯಸ್ಸಲ್ಲೇ ಬಿಕ್ಷುವಾದ ಆಜಾನ್ ಬ್ರಹ್ಮ| Story of a monk
ಆಜಾನ್ ಬ್ರಹ್ಮ ಲಂಡನ್ 'ನಲ್ಲಿ ಹುಟ್ಟಿ ಬೆಳೆದವರು ತಮ್ಮ ಹದಿನಾರನೇ ವರ್ಷದಲ್ಲಿ ಬುದ್ಧ ಬೋಧಿಸಿದ ಬಿಡುಗಡೆಯ ಹಾದಿಯನ್ನು ಒಪ್ಪಿಕೊಂಡು ಬಿಕ್ಷು ಆದರು. ವಿದ್ಯಾಭ್ಯಾಸ ಮುಂದುವರಿಸುತ್ತಲೇ ಬೌಧ ಬಿಕ್ಷುತ್ವ ಪಾಲಿಸಿದರು. ಆಮೇಲೆ .. ೧೯೮೩ರಲ್ಲಿ ಆಜಾನ್ ಬ್ರಹ್ಮರನ್ನ ಆಸ್ಟ್ರೇಲಿಯಾದ ಪರ್ತ್ ಶಹರಕ್ಕೆ ಕಳಿಸಲಾಯಿತು .. ಆಗ .. ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 421 : ಸೀತಾನ್ವೇಷಣೆ | Story from Ramayana
ರಾಮಾಯಣದ ಒಂದು ಸಂಧರ್ಭ ಇದು ಸೀತಾನ್ವೇಷಣೆಯಲ್ಲಿ ಶ್ರೀ ರಾಮಚಂದ್ರ ಸುಗ್ರೀವರ ಸಖ್ಯ ಆಗ್ತದೆ.. ರಾಮಚಂದ್ರ ಪ್ರಭುವಿನ ಪರಮ ಭಕ್ತ ಆಂಜನೇಯನೇ ಮೊದಲಾಗಿ ಸಾವಿರಾರು ವಾನರ ವೀರರು ಪ್ರಥ್ವಿಯ ಮೂಲೆ ಮೂಲೆಗಳಿಗೆ ಹೋಗಿ ಸೀತೆಯನ್ನ ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾರೆ .. ಆಮೇಲೇನಾಯ್ತು ? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 420 :ಗುರು ಕಲಿಸಿದ ಪಾಠ | lessons from a saint
ಒಂದಾನೊಂದು ಕಾಲದಲ್ಲಿ ಒಂದು ಬುದ್ಧ ವಿಹಾರ ಇತ್ತು. ಇಡೀ ದೇಶದಲ್ಲಿ ಹೆಸರಾಗಿದ್ದ ಮಠ ಅದು, ಆ ಮಠದ ಗುರು ಪರಮ ಜ್ಞಾನಿ ಆಗಿದ್ದ. ಇಡೀ ಮಠ ಎರಡು ಕಟ್ಟಡಗಳಲ್ಲಿತ್ತು. ಒಂದೊಂದು ವಿಭಾಗದಲ್ಲಿ ಐದುನೂರು ವಿದ್ಯಾರ್ಥಿಗಳಿದ್ರು. ಒಮ್ಮೆ ಒಂದು ಬೆಕ್ಕು ಇವರ ಮಠಕ್ಕೆ ಬಂತು ಆ ಬೆಕ್ಕು ಒಮ್ಮೆ ಒಂದು ಕಟ್ಟಡ ದಲ್ಲಿ ಇದ್ರೆ ಮತ್ತೊಂದಷ್ಟು ದಿನ ಇನ್ನೊಂದು ಕಟ್ಟಡದಲ್ಲಿರುತ್ತಿತ್ತು. ಎರಡೂ ಕಟ್ಟಡದಲ್ಲಿದ್ದವರಿಗೆ ಈ ಬೆಕ್ಕು ತಮ್ಮದಾಗಬೇಕೆಂಬ ಆಸೆ ಬಂತು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 419 :ಯಾವುದು ನಿಜವಾದ ಧರ್ಮ | Meaning of Dharma
ಬಹಳ ಚಂದದ ಒಂದು ಪ್ರಮೇಯ.ಧರ್ಮ ಎಂದರೇನು ಅಂತ ಯುದಿರಷ್ಟಿರ ಭೀಷ್ಮನನ್ನು ಪ್ರಶ್ನಿಸುತ್ತಾನೆ. ಪಿತಾಮಹ ರಕ್ಷಣೆಯನ್ನು ಅಪೇಕ್ಷಿಸಿ ಬಂದವರನ್ನು ಶತ್ರುವೇ ಆಗಿದ್ದರೂ ಹೇಗೆ ನಡೆಸಿಕೊಳ್ಳಬೇಕು? ಹೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಭೀಷ್ಮರು ಒಂದು ಕಥೆ ಹೇಳುತ್ತಾರೆ ಯುಧಿಷ್ಠಿರ ಹಿಂದೆ ಭಗವಾನ್ ಪರಶುರಾಮ ಹೇಳಿದ ಕಥೆಯಿದು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 418 : ಜೀವನದ ಲಲಿತ ಕಲೆ | Art of living good life
ಒಬ್ಬ ಯುವಕನಿಗೆ ಬದುಕಿಗೆ ಅರ್ಥವಿದೆಯಾ ಎಂಬ ಅನುಮಾನ ಬಂತು ಹಾಗಾಗಿ ಆತ ತಿಳಿದವರನ್ನು ಪ್ರಶ್ನಿಸಿದ. ಆದ್ರೆ ಉತ್ತರ ಸಿಗಲಿಲ್ಲ ತನ್ನ ಊರಿನಿಂದ ಪಕ್ಕದ ಊರಿಗೂ ಹೋಗಿ ಅದೇ ಪ್ರಶ್ನೆ ಕೇಳಿದ ಅಲ್ಲೂ ಉತ್ತರ ಸಿಗಲಿಲ್ಲ ಕೊನೆಗೊಂದು ದಿನ ಒಬ್ಬ ಸಾಧು ಯುವಕನಿಗೆ ಎದುರಾದ ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 417 :ಅಹಂ ಎಂಬ ಕತ್ತಲು | The ego's evil side
ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣತಮ್ಮಂದಿರ ನಡುವೆ ಯಾವುದೊ ಕ್ಷುಲ್ಲಕ ಕಾರಣಕ್ಕೆ ವೈಮನಸ್ಸು ಬಂತು. ಒಳಗೊಳಗೇ ಕುಡಿಯುತ್ತಿದ್ದ ಅದು ಶಬ್ದಗಳಾಗಿ ವಾಕ್ಯಗಳಾಗಿ ಹೊರಬಂತು. ಅದು ಅವರಿವರ ಕಿವಿಗೆ ಬಿತ್ತು , ಕೆಲ ಹಿತೈಷಿಗಳು ಅದಕ್ಕೆ ಸ್ವಾರ್ಥದ ಉಪ್ಪು ಖಾರ ಸೇರಿಸಿ ಈ ಅಣ್ಣತಮ್ಮಂದಿರಿಗೆ ಹಿತವಚನದ ರೂಪದಲ್ಲಿ ಕಿವಿಯೂದಿದರು. ಇಬ್ಬರೂ ಅದನ್ನು ನಂಬಿದ್ರು ಆಮೇಲೇನಾಯ್ತು ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 416 :ಬದುಕುವ ಕಲೆ | Art of living
ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು?
ಕೇಳಿ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 415 : ತಂದೆಯ ಸಿಟ್ಟು, ಪೆಟ್ಟುತಿಂದ ಮಕ್ಕಳು | Story of a father
ತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು.. ಕೇಳಿ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 414 : ಭಗವಂತನ ಉಡುಗೊರೆ | Gift from the God
ಬೆಟ್ಟದ ತಪ್ಪಲಿನಲ್ಲಿ ಒಬ್ಬ ಸಂತ ಮಡದಿ ಮಗನೊಂದಿಗೆ ವಾಸವಾಗಿದ್ದ. ಆರಕ್ಕೇರದೆ ಮೂರಕ್ಕಿಳಿಯದೆ ಬಂದದ್ದನ್ನು ಬಂದಹಾಗೆ ಸ್ವೀಕರಿಸುತ್ತಾ, ಎಲ್ಲವೂ ಭಗವಂತನ ದೇಣಿಗೆ, ಆಶೀರ್ವಾದ ಎಂದು ಬದುಕುತ್ತಿದ್ದ. ಒಂದು ದಿನ ಅವನ ಮನೆಯಂಗಳಕ್ಕೆ ಚಂದದ ಬಿಳಿ ಕುದುರೆಯೊಂದು ಬಂತು...ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 413 :ಕ್ರೂರ ವ್ಯಕ್ತಿಯೊಬ್ಬನ ಕಥೆ ಇದು! Story of a cruel man
ಅತ್ಯಂತ ಕ್ರೂರಿ ಮನುಷ್ಯನೊಬ್ಬ ಇದ್ದ. ಬೇರೆಯವರಿಗೆ ಹಿಂಸೆ ಆಗೋದನ್ನು ನೋಡೋದು, ಹಿಂಸೆ ಮಾಡೋದು ಅವನಿಗೆ ತುಂಬಾ ಸಂತೋಷ ಕೊಡುತ್ತಿತ್ತು. ಒಂದು ದಿನ ಒಂದು ಜೇಡದ ಹುಳು ಅವನಿಗೆ ಅಡ್ಡ ಬಂತು. ಕಾಲಿನಿಂದ ಅದನ್ನು ಹೊಸಕಿ ಸಾಯಿಸಬೇಕು ಅದು ಪಡುವ ಸಂಕಟ ನೋಡಬೇಕು ಅನ್ನುವ ಬಯಕೆ ಆಯ್ತು ಆದ್ರೆ ....ಮುಂದೆ ಕೇಳಿ
ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 412 : ಊರಿಗೆ ಬಂದ ಮಹಾತಪಸ್ವಿ ಸಂತ | A Saint's Journey to Transform a Village
ಊರ ಮುಂದಿನ ತೋಪಿನಲ್ಲಿ ಮಹಾತಪಸ್ವಿ ಸಂತಾನೋರ್ವರು ಬಂದಿದ್ದಾರೆ ಅಂತ ಸುದ್ದಿ ಹರಡಿತ್ತು, ರಾಜನಾದಿಯಾಗಿ ಊರವರೆಲ್ಲಾವರನನ್ನ ಕಾಣಲಿಕ್ಕೆ, ತಮ್ಮ ತಮ್ಮ ದುಃಖ ದುಮ್ಮಾನಗಳನ್ನೆಲ್ಲಾ ಅರುಹಿ ಪರಿಹಾರ ಪಡಿಯಲಿಕ್ಕೆ ಸಾಲುಗಟ್ಟಿ ನಿಂತರು.. ಆಮೇಲೇನಾಯ್ತು ? ಕೇಳಿ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan
In this episode, Dr. Sandhya S. Pai narrates very famous Mahabharata S3 : EP - 50 : ಸಾವಿತ್ರಿ ಸತ್ಯವಾನರ ಕಥೆ |The story of Savitri Satyavan ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಸಾವಿತ್ರಿ ಸತ್ಯವಾನರ ಕಥೆ . ಹಿಂದೆ ಅಶ್ವಪತಿ ಎಂಬ ರಾಜನಿದ್ದ. ಮಕ್ಕಳಿಲ್ಲದ ಆತ ತಪಸ್ಸು ಮಾಡಿ ಮಗುವೊಂದನ್ನು ವರವಾಗಿ ಪಡೆದ. ಮುಂದೆ ಈ ಮಗು ಸಾವಿತ್ರಿಯಾಗಿ ಬೆಳೆದಳು. ಆಕೆಯ ಪತಿಯ ಸಾವು ಕಣ್ಣ ಮುಂದೆಯೇ ಇರುವುದನ್ನು ಕಂಡು ಆಕೆ ಏನು ಮಾಡಿದಳು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 411 :ಸೀತೆಯ ಹುಡುಕಹೊರಟ ಹನುಮ | Hanuman finding Seetha
ಹನುಮಂತ ಸಮುದ್ರ ದಾಟಿ ಲಂಕೆಗೆ ಬಂದು ಸೀತೆಗಾಗಿ ಹುಡುಕಾಡಿದ, ದಶ ದಿಕ್ಕುಗಳಲ್ಲಿ ಹುಡುಕಿದ.. ಎಲ್ಲಿಯೂ ಸೀತೆಯ ಸುಳಿವಿಲ್ಲ.. ಹತಾಶೆಯಿಂದ.. ತಾಯಿಯ ವಿಷಯ ತಿಳಿಯಲಿಲ್ಲ ಎಂದು ರಾಮನಲ್ಲಿ ಹೇಳುವುದು ಹೇಗೆ.. ರಾಮಚಂದ್ರನ ದುಃಖಿತ ನಿರಾಶಾ ಮುಖವನ್ನ ನೋಡೂದುಹೇಗೆ? ಅಂದುಕೊಳ್ಳುತ್ತಿರುವಾಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 410 : ಬುದ್ಧ ಕೇಳಿದ ಏಳು ಪ್ರಶ್ನೆಗಳು | Seven Questions Asked by the Buddha
ಬುದ್ಧ ಒಮ್ಮೆ ಆಸಕ್ತರಿಗೆ ಪ್ರವಚನ ನೀಡುತ್ತಿದ್ದ. ಈ ಪ್ರವಚನ ಬುದ್ಧ ಕೇಳಿದ ಏಳು ಓಗಟುಗಳು ಎಂದು ಪ್ರಸಿದ್ಧಿ ಪಡೆದಿವೆ. ಮೊದಲ ಒಗಟಾಗಿ ಬುದ್ಧ ಈ ಪ್ರಶ್ನೆ ಕೇಳಿದ ಜಗತ್ತಿನಲ್ಲಿ ಅತ್ಯಂತ ಹರಿತವಾದದ್ದು ಯಾವುದು? ಶಿಷ್ಯ ವೃಂದದಲ್ಲಿ ಒಕ್ಕೊರಲಿನಿಂದ ಕೇಳಿಬಂತು ಕತ್ತಿ ಖಡ್ಗಗಳೆಂದು ಆದರೆ ಬುದ್ಧ ನಕ್ಕ ...ಯಾಕೆ?
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana
In this episode, Dr. Sandhya S. Pai narrates very famous Mahabharata S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana ವನವಾಸದಲ್ಲಿರುವ ಪಾಂಡವರಿಗೆ ಸಮಸ್ಯೆ ನೀಡುವ ಉದ್ದೇಶದಿಂದ ದುರ್ಯೋಧನನು ತನ್ನ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿ ಹಾಗೂ ಅವರ ಸಾವಿರ ಶಿಶ್ಯರನ್ನು ಸತ್ಕಾರ ಮಾಡಿ, ಬಳಿಕ ಪಾಂಡವರಿಂದಲೂ ಸತ್ಕಾರ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಂದ ಇಷ್ಟು ಜನರಿಗೆ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಅರ್ಥವಾಗದೆ ಇದ್ದಾಗ ಶ್ರೀ ಕೃಷ್ಣ ಏನು ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 409 :ಆತ್ಮಹತ್ಯೆ ಒಂದೇ ಪರಿಹಾರವಲ್ಲ|Suicide is not the ultimate solution
ಜೀವನದಲ್ಲಿ ಹತಾಶನಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ. ಸಾಯಲು ತುಂಬಾ ಇಷ್ಟ ನೋವಾಗದಂತಹ ಸುಲಭ ಉಪಾಯ ಯಾವುದಿರಬಹುದು ಅಂತ ತಿಳಿದುಕೊಳ್ಳೋದಿಕ್ಕೆ ಕೆಲವು ಸಮಯ ಹಿಡಿಯಿತು. ವಿಚಾರಿಸಿದ್ರೆ ರೈಲಿನ ಹಳಿಯ ಮೇಲಿನ ಸಾವು ಕಡಿಮೆ ತ್ರಾಸದಾಯಕ ಎಂದು ತಿಳಿಯಿತು. ರೈಲು ನಿಲ್ದಾಣಕ್ಕೆ ಬಂದ ಅಲ್ಲಿ ಜನರು ಕಿಕ್ಕಿರಿದು ನೆರೆದಿದ್ರು ಎಲ್ಲಿಗೆಹೋಗ್ತಿದ್ದಾರೆ ಅಂದ್ರೆ ಎಲ್ಲರೂ.......
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP - 408 : ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | The story of Kalidasa
ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತಿತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 48 : ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ | Duryodhana defeated by Chitrasena
In this episode, Dr. Sandhya S. Pai narrates very famous Mahabharata S3 : EP - 48 : ಮಹಾಭಾರತದ ಸುಂದರ ಕಥೆಗಳಲ್ಲಿ ಇದೂ ಒಂದು. ಚಿತ್ರಸೇನನಿಂದ ಪರಾಜಿತನಾದ ದುರ್ಯೋಧನ. ದ್ವೈತ ವನದಲ್ಲಿದ್ದ ಪಾಂಡವರ ಎದುರು ಅಹಂಕಾರ ತೋರಿಸಲು ದುರ್ಯೋಧನ ಬಂದಾಗ ಗಂಧರ್ವನೋರ್ವನ ಜೊತೆ ಕಲಹವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 347 : ಚೀನಾ ದೇಶದ ಕಥೆ; ಫೆಂಗ್ ತಂಡ ಅಪರೂಪದ ವಸ್ತು | Story of feng
ಚೀನಾ ದೇಶದಲ್ಲಿ ಅಂತರ್ಯುದ್ಧಗಳು ನಡೀತಾ ಇದ್ದ ಕಾಲ ಫೆಂಗ್ ಎಂಬ ಹೆಸರಿನ ಯುವಕನೊಬ್ಬನಿದ್ದ, ಕಾಡು ಬಡತನದಲ್ಲಿದ್ದ , ಯಾವುದೇ ರೀತಿಯ ಸಾಂಪ್ರದಾಯಿಕ ವಿದ್ಯಾಭ್ಯಾಸ ಇಲ್ಲದ್ದರಿಂದ ಎಲ್ಲೂ ಕೆಲಸ ಸಿಕ್ತಾ ಇರಲಿಲ್ಲ.. ತುಂಬಾ ಯೋಚಿಸಿ ಪ್ರಾಂತ್ಯದ ಪಾಳೇಗಾರನ ಅರಮನೆಗೆ ಹೋದ ಅವನ ಮಿತ್ರ ಒಬ್ಬ ಈ ಪಾಳೇಗಾರನ ಅಂಗರಕ್ಷಕರಲ್ಲೊಬ್ಬನಾಗಿದ್ದ.. ಆಮೇಲೇನಾಯ್ತು ಕೇಳಿ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 346 : ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ | A beautiful life requires awareness
ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation
In this episode, Dr. Sandhya S. Pai narrates very famous Mahabharata S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation ಪಾಂಡವರು ದ್ವೈತ ಸರೋವರದ ಬಳಿಯಲ್ಲಿ, ಹೆಚ್ಚು ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ಬಿಡಾರ ಹೂಡಿದ್ರು.. ಅವರು ಅಲ್ಲಿ ಇರುವ ವಿಚಾರ ತಿಳಿದ ತಪಸ್ವಿಗಳು.. ಅವರಲ್ಲಿಗೆ ಬರ್ತಾ ಇದ್ರು.. ಹೀಗೆ ಒಂದು ದಿನ ಒಬ್ಬ ಬ್ರಾಹ್ಮಣನನ್ನ ಆದರಪೂರ್ವಕವಾಗಿ ಸತ್ಕರಿಸಿದ್ರು.. ಅವನು ಅವರ ದುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದುಃಖಿತನಾದ ಇವರ ಕಷ್ಟದೆಸೆಯನ್ನ ದೃತರಾಷ್ಟನಿಗೆ ತಿಳಿಸಬೇಕು ಅಂತ ಸ್ವಯಂ ಪ್ರೇರಣೆಯಿಂದ ಹಸ್ತಿನಾಪುರಕ್ಕೆ ಹೊರಟಾಗ .. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 345 : ಶ್ರೀಕೃಷ್ಣ ಕಲಿಸಿದ ಪಾಠ | A lesson by Shri Krishna
ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಗಯಾ ಎಂಬ ಯಕ್ಷ ಇದ್ದ . ಒಂದು ದಿನ ಇವನು ಆಕಾಶ ಮಾರ್ಗವಾಗಿ ಹೋಗುತ್ತಿದ್ದ ಇವನ ರಥ ದ್ವಾರಕೆಯ ಮೇಲಿರುವಾಗ ಅಚಾನಕ್ಕಾಗಿ ಅವನಿಗೆ ಉಗುಳ ಬೇಕೆನಿಸಿತು ಉಗಿದೆ ಬಿಟ್ಟ. ಆಗಿನ ಕಾಲದಲ್ಲೂ ಎಲ್ಲೆಂದರಲ್ಲಿ ಉಗಿಯಬಾರದೆಂದಿತ್ತೇನೋ ಆದರೆ ಇದೊಂದು ಭಾರತೀಯರ ಕೆಟ್ಟ ಚಾಳಿ ! ಅವನ ಉಗುಳು ಬಿಸಿಲುಮಚ್ಚಿನ ಮೇಲೆ ಕುಳಿತಿದ್ದ ಕೃಷ್ಣನ ತಲೆಯಮೇಲೆ ಬಿತ್ತು ಆಮೇಲೆನಾಯ್ತು......
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 344 : ಭಾರದ್ವಾಜ ಋಷಿಯ ಕತೆ | Story of Bharadhvaja Muni
ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika
In this episode, Dr. Sandhya S. Pai narrates very famous Mahabharata S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika ಮಹಾಭಾರತ ಮನೋಹರ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಇದೂ ಒಂದು. ಕೌಶಿಕ ಎಂಬ ಬ್ರಾಹ್ಮಣ ತಪೋಧನನೂ , ಧರ್ಮಶೀಲನೂ ಆಗಿದ್ದ. ಒಮ್ಮೆ ಆತ ಮರದ ಕೆಳಗೆ ಕೂತು ವೇದ ಪಾರಾಯಣ ಮಾಡುವಾಗ ಪಕ್ಷಿಯೊಂದು ಹಿಕ್ಕೆ ಹಾಕಿತು ಇದರಿಂದ ಕೋಪಗೊಂಡ ಕೌಶಿಕ ಬ್ರಾಹ್ಮಣ ಏನು ಮಾಡಿದ ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com